ಪೋಸ್ಟ್‌ಗಳು

ಆಂಟಿನೇ ದೇವರು!

ಇಮೇಜ್
" ಹಾ ಗಾದ್ರೆ ನೀವ್ಯಾಕೆ ಶ್ರೀಮಂತೆ ಆಗ್ದೇ 60 ವರ್ಷ ಆದ್ರೂ ಕಸ ಗುಡಿಸ್ತಾ ಇದ್ದೀರಿ? ನೀವೇ ದೇವ್ರಾಗ್ಬೋದಿತ್ತಲಾ?" ನಾನ್ ಕೇಳಿದ್ ಪ್ರಶ್ನೆಗೆ ಆಂಟಿ ಸ್ವಲ್ಪನೂ ಬೇಸರ ಮಾಡಿಕೊಳ್ಳಲೇ ಇಲ್ಲ. ಅದರ ಬದಲಾಗಿ "ನಾನೇನಾದ್ರು ಶ್ರೀಮಂತೆ ಆಗಿದ್ದಿದ್ರೆ ಆಫೀಸ್ ಕಸ ಹೊಡಿಯಕೆ ಯಾರ್ ಸಿಕ್ತಿದ್ರು? ಈ ಆಪೀಸ್ ಓನರ್ಗೆ ನಂಗಿತ ಕಷ್ಟ ಐತೆ ತಕ. ನಂಗ್ ಸಿರಿತನ ಬ್ಯಾಡಾಕೂ ಬ್ಯಾಡ" ಅಂತ ನಕ್ರು. ನಮ್ಮಾಫಿಸಿನ ಆಂಟಿ ಅಂದ್ರೆ ನನಗಿಷ್ಟ. ಯಾಕಂದ್ರೆ ಅವರೊಬ್ಬರ ಹತ್ತಿರ ಮಾತ್ರ ಕನ್ನಡ ಅಂತ ಮಾತಾಡೋದು. ಎಲ್ಲರಿಗಿಂತ ಮುಂಚೆ ಬಂದು ಮಾನಿಟರ್ ಒಳಗೆ ಹೊಕ್ಕಿ ತಲ್ಲೀನಳಾಗೋ ನನಗೆ "ಗುಡ್ ಮಾರ್ನಿಂಗ್ ಕಣ, ನಿದ್ದೆ ಮಾಡು ಚನಾಗಿ ಇವತ್ತಾದ್ರು" ಅಂತ  ಹೇಳೋರು ಅವರೊಬ್ಬರೇ. ಬೇಡವಾದ್ರೂ ಎಲ್ಲ ಸುದ್ದಿಗಳನ್ನ ಕಿವಿಗೆ ಮುಟ್ಟಿಸಿ, ಹಬ್ಬದ ತಿಂಡಿಯನ್ನ ಕೈಗೆ ಒಪ್ಪಿಸಿ, ವಾರಾಂತ್ಯದಲ್ಲಿ ಸಾಕು ಪಿಜಿಗೆ ನಡಿ ಎಂದು ಎಬ್ಬಿಸುವವವರು ಅವರೇ. ನನ್ನ ಹೆಸರು ಅವರಿಗೆ ಗೊತ್ತಿಲ್ಲ. ಆದರೂ ಮಾತನಾಡುತ್ತೇವೆ ಮತ್ತು ಕಷ್ಟ-ಸುಖ ಹಂಚಿಕೊಳ್ಳುತ್ತೇವೆ. 2 ತಿಂಗಳಿಂದ ಗ್ಯಾಸ್ ಬುಕ್ಕಾಗಿಲ್ಲ, ಗಂಡನಿಗೆ ಹುಷಾರಿಲ್ಲ, ಮೂವರು ಹೆಣ್ಣುಮಕ್ಕಳಿಗೆ ಮದುವೆಯಾಗಿದೆ, ಒಬ್ಬಳ ಗಂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ದಾರಿಯಲ್ಲಿ ಹೊಸ ಯಾರೋ ತಮಿಳರು ಅಂಗಡಿ ತೆರೆದಿದ್ದಾರೆ, ಇವತ್ತು ಎಳನೀರನ್ನು 20 ರೂಪಾಯಿಗೆ ಮಾರುತ್ತಿದ್ದರು, ರೇಷನ್ ಕ್ಯೂ ಗೆ ಬೆಳಗ...

ಜಿಗಣೆ ಪ್ರಕರಣ

ಇಮೇಜ್
ಒಂ ದು unsolved ಕ್ರೈಂ ಇದೆ. ಮೊನ್ನೆ ಮನೆಯೆಲ್ಲ ರಕ್ತವಾಗಿತ್ತು. ಯಾರಿಗೆ ಗಾಯವಾಗಿದೆ ಎಂದು ತಿಳಿಯಲೇ ಎರಡು ಗಂಟೆ ಬೇಕಾಯಿತು. ಸಂತ್ರಸ್ತರನ್ನು ಪತ್ತೆ ಹಚ್ಚಿದರೂ, ಅಪರಾಧಿ ಯಾರೆಂದು ತಿಳಿಯಲಿಲ್ಲ. ಪತ್ತೇದಾರಿಗಳಂತೆ ಜಾಡು ಹಿಡಿದು ಹೊರಟರೂ ಎಲ್ಲಿ ತಲೆಮರೆಸಿಕೊಂಡಿದ್ದಾರೆಂದು ಗೊತ್ತಾಗಲಿಲ್ಲ. ಕಂಪ್ಲೇಟ್‌ ಕೊಟ್ಟು ಪ್ರಯೋಜನವಿಲ್ಲವೆಂದು ಸುಮ್ಮನಾದೆವು. ಏಕೆಂದರೆ ಅವರೆಲ್ಲ ರಕ್ತ ಬೀಜಾಸುರನ ಕಡೆಯವರಂತೆ!‌  ಅವರೇನಾದರೂ ಸೈನ್ಯ ಕಟ್ಟಿಕೊಂಡು ಬಂದರೆ ಡೆಟಾಲ್‌, ಅಂಟ್ವಾಳ ಕಾಯಿಯ ಕೋಟೆಯನ್ನೂ ಮುರಿದು ನಾವು ಹುಲು ಮಾನವರು ಸೋಲಬೇಕಾಗುತ್ತದೆ. ಮಳೆಗಾಲದಲ್ಲಿ ವಿಶೇಷ ಶಕ್ತಿ ಪಡೆದು ದಾಂಗುಡಿಯಿಟ್ಟು, ಹೆಂಗಸರ ಕೈಲಿ ಗಂಡಸರು ಬೈಗುಳ ತಿನ್ನುವಂತೆ ಮಾಡುತ್ತಾರೆ. ಹಾ ಹಾ! ಅವರೆ ಜಿಗಣಾಸುರರು. ಇಂಬಳ ಅಥವಾ ಜಿಗಣೆಗಳಷ್ಟು ತಣ್ಣಗಿನ ಕ್ರೂರಿಗಳು ಬಹುಶಃ ಮತ್ಯಾರಿಲ್ಲ. ಸದ್ದಿಲ್ಲದೇ ರಕ್ತ ಕುಡಿದು, ಕಾಲಿನಿಂದ ಇಳಿದು ಹೋಗಿ, ಯಾವುದೇ ಸಾಕ್ಷಿ ಉಳಿಸದ ಈ ಕ್ರಿಮಿನಿಲ್‌ಗಳಿಂದ ಆಗುವ ತೊಂದರೆ ಮಾತ್ರ ವಿವರಿಸಲಸದಳ. ಇಂಗ್ಲಿಷ್‌ ಕವಿ ವರ್ಡ್ಸ್‌ವರ್ಥ್‌ ಗೊತ್ತಿರಬೇಕಲ್ಲ? ಅವರ "ಲೀಚ್‌ ಗ್ಯಾದರರ್‌" ಪದ್ಯ ಓದುವಾಗಲೆಲ್ಲ ಆ ವೃದ್ಧ ಜೀವಿ ಅಲ್ಲೆಲ್ಲೋ ಜಿಗಣೆಗಳನ್ನು ಕಷ್ಟಪಟ್ಟು ಹೆಕ್ಕುವ ಬದಲು, ಇಲ್ಲೇ ಬರಬಹುದಿತ್ತಲ್ಲ ಎನ್ನಿಸಿದ್ದುಂಟು. ಆದರೆ ಇಲ್ಲಿ ಮಾತ್ರ ಜಿಗಣೆಗಳಿಗೆ ಡೋಂಟ್‌ ಕೇರ್‌ ಅನ್ನೋದು ಕೂಡ ತಕ್ಷಣ ನೆನಪಾಗಿದ್ದುಂಟು. ಇಲ್ಲಿನ ಜನ ಲ...

ತಪ್ಪೋ ತಪ್ಪು

ಇಮೇಜ್
  " ನಾನ್‌ ಹಾಗೆ ಹೇಳ್ತಿರೋದಲ್ಲ, ದಯವಿಟ್ಟು ಅಪಾರ್ಥ ಮಾಡ್ಕೋಬೇಡಿ ಪ್ಲೀಸ್"‌ ಅಂದಾಗ ನಖಶಿಖಾಂತ ಉರಿದು ಹೋಗಿತ್ತು. "ಅಲ್ಲ, ನನ್ನ ಏನೆಂದುಕೊಂಡಿದ್ದೀರಾ?" ಎಂದು ಕೇಳಿದ ಕೂಡಲೇ ಒಂದೇ ಒಂದು ಮಾತು ಕೂಡ ನಾಲಗೆಯಲ್ಲಿ ಹೊರಳದೇ ಸುಮ್ಮನಾಗಿದ್ದೆ. ಅವರ ಮಾತಿನಲ್ಲೂ ನನಗೆ ʼದಯವಿಟ್ಟುʼ ಹಾಗೂ ʼಪ್ಲೀಸ್‌ʼ ಎರಡೂ ಪದಗಳನ್ನು ಒಟ್ಟಾಗಿ ಬಳಸಿದರೆ ತಪ್ಪಾಗುವುದಿಲ್ಲವೇ ಎಂದು ಅನಿಸಿದಕ್ಕೆ ನಂದೊಂದು ಹಾಳು ಬುದ್ಧಿ ಎಂದು ಸುಮ್ಮನಾಗಿದ್ದೆ. ಎಲ್ಲ ವಾಕ್ಯಗಳಲ್ಲೂ ತಪ್ಪುಗಳನ್ನು ಹುಡುಕುವುದು... ಅಲ್ಲಲ್ಲ ತಪ್ಪುಗಳು ಕಾಣುವುದು ಖಯಾಲಿಯೋ ಅಥವಾ ಖಾಯಿಲಿಯೋ ತಿಳಿಯದು. ಆದರೆ ಹೀಗೊಂದು ಅಭ್ಯಾಸ ಇರುವುದಂತೂ ಆಗಾಗ ಸಾಬೀತಾಗಿ ಹಲವರ ಕೆಂಗಣ್ಣಿಗೆ ಗುರಿಯಾಗುವುದುಂಟು. ತಪ್ಪನ್ನು ಕಂಡುಹಿಡಿದು ನನ್ನಲ್ಲೇ ಇಟ್ಟುಕೊಂಡರೆ ಅಥವಾ ನಾನೂ ಯಾವುದೇ ತಪ್ಪುಗಳನ್ನು ಮಾಡದಿದ್ದರೆ ಈ ರೀತಿಯ ಸಮಸ್ಯೆ ಆಗುತ್ತಿರಲಿಲ್ಲವೇನೋ.  ಬೆಂಗಳೂರಿನಿಂದ ಮನೆಗೆ ಬರುವಾಗ ಕತ್ತರಿಗುಪ್ಪೆಯಲ್ಲಿ ಬಸ್‌ ಹತ್ತಬೇಕಿತ್ತು. ಕಂಡಕ್ಟರ್‌ಗೆ ಕರೆ ಮಾಡಿ ಎಲ್ಲಿ ಹತ್ತಬೇಕೆಂದು ವಿಚಾರಿಸಿದೆ. ಅದರ ಹಿಂದಿನ ಕಥೆ ಇನ್ನೊಂದು ಬ್ಲಾಗ್‌ಗೆ ಆಗುವಷ್ಟು ದೊಡ್ಡದಿದೆ ಬಿಡಿ. ಒಟ್ಟಿನಲ್ಲಿ ಅವರು ಕತ್ತರಿಗುಪ್ಪೆ ಬಳಿ ಇರುವ "ಅಣ್ಣಿ ಕುಟೀರ"ದ ಬಳಿ ನಿಂತಿರಲು ಸೂಚಿಸಿದರು. ಎಲ್ಲಿ ಹುಡುಕಿದರೂ "ಅಣ್ಣಿ ಕುಟೀರ" ಇಲ್ಲ. ಕೊನೆಗೆ ಬಸ್‌ ಹತ್ತುವಾಗ "ಅಣ್ಣ, ಅದು...

ಅಯ್ಯಾ ಮಹಿಷಾ!

ಇಮೇಜ್
ದೂ ರದೂರಿನಲ್ಲಿ ಉದ್ಯೋಗದಲ್ಲಿರೋ ಬೆಳೆದ ಮಕ್ಕಳೆಲ್ಲ ಪೋಷಕರಿಗೆ ತಿಳಿಯದಂತೆ ಸರ್‌ಪ್ರೈಸ್‌ ಕೊಡೋ ಸಲುವಾಗಿ ಇದ್ದಕ್ಕಿಂದಂತೆ ಮನೆಗೆ ಹೋಗಿ, ಅದನ್ನು ವಿಡಿಯೋ ಕೂಡ ಮಾಡಿ ಪೋಸ್ಟ್‌ ಮಾಡಿದ್ದನ್ನು ನೋಡ್ತಾ ನಾನೂ ಒಂದು ಯೋಜನೆ ಹಾಕಿದ್ದೆ. ಯೋಚನೆಯ ಹಿಂದೆಯೇ ಭಯವೂ ಒತ್ತರಿಸಿಕೊಂಡು ಬಂದಿತ್ತು. ಬೆಂಗಳೂರಿನಿಂದ ರಾತ್ರಿ ಬಸ್‌ ಹತ್ತಿದರೆ, ಕಳಸದಲ್ಲಿ ಇಳಿದು, ಅಲ್ಲಿಂದ ಮುನ್ನೂರ್‌ಪಾಲಿನಲ್ಲಿರುವ ನಮ್ಮ ಮೆನೆಗೆ ಹೋಗಬೇಕೆಂದರೆ, ಸಂಪಿಗೆಕಟ್ಟೆ ಬಸ್‌ ಸ್ಟಾಪಿಗೆ ಹೇಗಾದರೂ ಕಷ್ಟ ಪಟ್ಟು ಎಂಟು ಕಿ.ಮೀ ಪ್ರಾಯಣಿಸಬಹುದು. ಸ್ವಂತ ವಾಹನವಿಲ್ಲದಿದ್ದರೆ, ಮತ್ತೆ ನಮ್ಮ ಮನೆಗೆ ಎರಡು ಮೈಲಿ ನಡೆಯಬೇಕಾಗುತ್ತದೆ. ಅಕಸ್ಮಾತ್‌ ದುಸ್ಸಾಹಸ ಮಾಡಿ ಒಬ್ಬಳೇ ನಡೆದು, ಅರ್ಧ ದಾರಿಯಲ್ಲಿ ಕಾಟಿಯ ಹಿಂಡು ಪೂರ್ಣಕುಂಭ ಸ್ವಾಗತ ಮಾಡಿದರೆ!? ಈ ಎಲ್ಲ ಯೋಚನೆಗಳಿಂದ ನಾನು ಅಪೂರ್ವಕ್ಕಾದರೂ ಮನೆಗೆ ಹೋಗಬೇಕು ಎಂದೆನಿಸಿದರೆ ಮೊದಲೇ ತಿಳಿಸಿಯೇ ತೆರಳೋದು. ಯಕ್ಷಗಾನದ ಶ್ರೀ ದೇವಿ ಮಹಾತ್ಮೆ ಪ್ರಸಂಗದಲ್ಲಿ ಬರುವ ಮಹಿಷಾಸುರನನ್ನು ಕಂಡು ರೋಮಾಂಚಿತರಾಗಿ, ಪ್ರಸಂಗ ಮುಗಿಸಿ ಅದೇ ರಾತ್ರಿ ನಮ್ಮೂರ ದಾರಿ ಹಿಡಿದರೆ ಇನ್ನೊಂದು ಮಹಿಷನ ದರ್ಶನವಾಗಿ ಹೊಸ ಪ್ರಸಂಗ ಸೃಷ್ಟಿಯಾಗುತ್ತದೆ. ಕಾಟಿ ಅಂದರೆ ಸಾಕು ನಮ್ಮ ಕಡೆ ವಿಧ ವಿಧ ಕಥೆಗಳು ಹುಟ್ಟಿಕೊಳ್ಳುತ್ತೆ. ಈ ಕಾಡುಕೋಣಗಳಂತೂ ವಿಲನ್‌ ಪಟ್ಟ ಹೊತ್ತ ಸೂಪರ್‌ ಹೀರೋಗಳಾಗಿವೆ. ಕಾಟಿ ನಿನಗ್ಯಾರು ಸಾಟಿ ಅನ್ನೋ ರೀತಿ, ಅವುಗಳ ರಾಜ್ಯಭಾರವನ್ನ ಕೇಳೋದ...

ಯೋಚನೆ ಮಾಡ್ಬೇಕು ಸ್ವಾಮಿ

ಇಮೇಜ್
"ಎ ಲ್ಲದಕ್ಕೂ ಯಾಕಿಷ್ಟು ಯೋಚನೆ ಮಾಡ್ತೀಯಾ?" ಅಂತಾ ಉದ್ದಾನುದ್ದ ಕಾಳಜಿಯಿಂದ ಮಾತಾಡೋರಿಗೆ ನನ್ನದೊಂದು ಪ್ರಶ್ನೆ: "ನೀವು ಯೋಚನೆ ಮಾಡೋದೇ ಇಲ್ವಾ?" ಹಾಗೊಂದು ಹೀಗೊಂದು ಚಿಕ್ಕ ಘಟನೆ ನಡೆದರೂ ಸಾಕು ಯೋಚನೆ ಹತ್ತುತ್ತೆ, ಯಾಕೆ ಅಂತಾನೆ ಬಗೆಹರಿಯೋದಿಲ್ಲ ಅಂತಾನೂ ಯೋಚನೆಯಾಗುತ್ತೆ, ಹೀಗೆ ಎಲ್ಲದಕ್ಕೂ ಯೋಚಿಸುವವರಾದ್ರೆ ನಾವು ಒಂದೇ ದೋಣಿಯ ಪ್ರಯಾಣಿಕರು ಅಂದುಕೊಳ್ಳಿ.   ಹಾಗೇ ಸುಮ್ಮನೆ ತಲೆಬುಡ ಇಲ್ಲದೇ ಇರೋ ಯೋಚನೆಗಳ ಹೊಯ್ದಾಟವನ್ನ ಸ್ಟ್ರೀಂ ಆಫ್‌ ಕಾನ್ಷಿಯಸ್‌ನೆಸ್‌ (stream of consciousness) ಅಂತ ಕರೀತಾರೆ. ಇದು ಸ್ಟ್ರೀಂ ಆಫ್‌ ಕಾನ್ಷಿಯಸ್‌ನೆಸ್‌ ಅಂತ ಪದವಿ ಆಂಗ್ಲ ಸಾಹಿತ್ಯ ಓದುವಾಗ ತಿಳಿಯೋದಕ್ಕಿಂತ ಮುಂಚೆಯಿಂದಾನೂ ಈ ಯೋಚನೆಗಳ ಝರಿಯಲ್ಲಿ ಈಜು ಬರದಿದ್ರೂ ತೇಲಾಡ್ತಾ ಇರ್ತಿದ್ದೆ. ಹೀಗೆ ಈಜು ಬಾರದ ಈಜುಪಟು ದಡ ತೇಲೋದಕ್ಕಿಂತ ಹೆಚ್ಚು ವ್ಯರ್ಥವಾಗಿ ಈಜಿದ್ದೇ ಹೆಚ್ಚು.  ತಲೆ ಚಿಟ್ಟು ಹಿಡಿಸುವ ಯೋಚನೆಗಳಾದ್ರೂ ಒಂಥರಾ ಸಂತೋಷ ಕೊಡುತ್ತವೆ. ಈ ಮೆದುಳಲ್ಲಿ ಅಷ್ಟೆಲ್ಲ ಸ್ಟೋರೇಜ್‌ಗೆ ಜಾಗವಾದರೂ ಎಲ್ಲಿದೆ ಅಂತಾನೂ ಯೋಚನೆಯಾಗುತ್ತೆ! ಕವಿಗಡಚುವಷ್ಟು ಮಾತನಾಡುವ ಸಹೋದ್ಯೋಗಳ ಮಧ್ಯೆಯೂ, ಪ್ರೇಮ ವಿಹಾರದಲ್ಲಿ ತೊಡಗಿರುವ ಅಥವಾ ಜೋರಾಗಿ ಭೋಜ್‌ಪುರಿ ಹಾಡು ಹಾಕಿಕೊಂಡಿರುವ ರೂಮ್‌ಮೇಟ್‌ಗಳಿರುವ ಪಿಜಿಯಲ್ಲೂ ಮೈಮರೆತು ಯೋಚಿಸುವ ಪರಮಾವಧಿ ತಲುಪಿದ್ದೀರಾದರೆ ಕಥೆ ಮುಗೀತು ಅಂತಾನೇ ಲೆಕ್ಕ. ಅದೇನು ಯೋಚಿಸ್ತೀರಿ ಅಂತ ಕೇಳಿದ್...